ಮೊನ್ನೆ ಯೋಗಿ ಶ್ರೀನಿವಾಸ ಅರ್ಕ, ಸಂಸ್ಥಾಪಕರು-ಸೆಂಟರ್ ಫಾರ್ ಕಾನ್ಶಿಯಸ್ ಅವೆರ್ನೆಸ್-ಅರ್ಕಧಾಮ, ಮೈಸೂರು, ರವರೊಂದಿಗೆ ಚರ್ಚೆ ಮಾಡುತ್ತಾ ನಾವು ಬೇರೆಯವರಿಗೆ ಸಹಾಯ ಮಾಡುತ್ತೇವೆ. ಆದರೆ, ಅವರ ಕಡೆಯಿಂದ ನಮ್ಮಂತೆಯೇ ಅವರೂ ನಮಗೆ ಸಹಾಯ ಮಾಡಲಿ ಎಂದು ನಿರೀಕ್ಷೆ ಮಾಡುತ್ತೇವೆ. ಆದರೆ ಅವರು ಸಹಾಯ ಮಾಡುವಷ್ಟು ಸಮರ್ಥರಿದ್ದರೂ ನಮಗೆ ಸಹಾಯ ಮಾಡುವುದಿಲ್ಲ, ಅಂಥವರನ್ನು ಹೇಗೆ ನಿಭಾಯಿಸುವುದು ಎಂದೆ? ಆಗ ಅವರು ಎದುರಿನ ವ್ಯಕ್ತಿ ಸಹಾಯ ಮಾಡಲಿ ಎಂದು ಏಕೆ ನಿರೀಕ್ಷೆ ಮಾಡುತ್ತೀರಿ. ನೀವು ಒಂದು ಕನ್ನಡಿಯ ಮುಂದೆ ನಿಂತು ನಿಮ್ಮ ಪ್ರತಿಬಿಂಬ ನೋಡಲು ಹೊರಟರೆ, ನಿಮ್ಮ ಪ್ರತಿಬಿಂಬ ಕನ್ನಡಿಯಲ್ಲಿ ತೋರುತ್ತದೆ. ಅದೇ ಒಂದು ಗೋಡೆಯ ಮುಂದೆ ಪ್ರತಿಬಿಂಬ ನೋಡಲು ಹೊರಟರೆ ನಿಮ್ಮ ಪ್ರತಿಬಿಂಬ ನಿಮಗೆ ಕಾಣಿಸುವುದಿಲ್ಲ, ಅಲ್ಲವೇ ಎಂದು ಮುಗುಳ್ನಕ್ಕರು. ಅವರ ಮುಗುಳ್ನಗೆ ನನಗೆ ಹಾಗೂ ನನ್ನ ಪ್ರಶ್ನೆಗೆ ಉತ್ತರವಾಗಿತ್ತು. ನಾವುಗಳು ನಮ್ಮ ಎದುರಿನ ವ್ಯಕ್ತಿ ಗೋಡೆಯೇ ಅಥವಾ ಕನ್ನಡಿಯೇ ಎಂದು ಅರಿತುಕೊಳ್ಳಬೇಕಾಗುತ್ತದೆ. ಆಗ ಮಾತ್ರ ನಾವು ಸಹಾಯದ ನಿರೀಕ್ಷೆ ಮಾಡಬಹುದಾಗಿದೆ.
ಹೆಚ್ಚಿನ ಮಾಹಿತಿಗಾಗಿ ಅರ್ಕಧಾಮ ಜಾಲತಾಣಕ್ಕೆ ಭೇಟಿ ನೀಡಿ: http://arkadhamaayurveda.com/ https://www.srinivasarka.org/ ರಮೇಶ ಎಂ.ಎಚ್. ಸಂಸ್ಥಾಪಕರು ನಿರಾತಂಕ ಸ್ವಯಂ ಸೇವಾ ಸಂಸ್ಥೆ
0 Comments
Leave a Reply. |
Categories
All
RAMESHA NIRATANKA ಉಲ್ಲಾಳು ವಾರ್ಡಿನ ಸಮಸ್ತ ನಾಗರೀಕರನ್ನು ಒಂದೇ ವೇದಿಕೆಯಡಿಯಲ್ಲಿ ತರಲು ಪ್ರಯತ್ನಿಸಲಾಗುತ್ತಿದೆ. ಈಗಾಗಲೇ ಸಮಾಜದ ವಿವಿಧ ಕ್ಷೇತ್ರದ 50,000 ಕ್ಕೂ ಹೆಚ್ಚು ಸದಸ್ಯರು ನಿರಾತಂಕ ಸ್ವಯಂ ಸೇವಾ ಸಂಸ್ಥೆಯೊಂದಿಗೆ ಒಡನಾಟದಲ್ಲಿದ್ದಾರೆ. ಹಲವಾರು ಸಮಾಜ ಸೇವಾ ಕಾರ್ಯಗಳಲ್ಲಿ ನಿರಾತಂಕ ಸಂಸ್ಥೆಗೆ ಬೆಂಬಲವನ್ನು ನೀಡುತ್ತಿದ್ದಾರೆ. ತಾವೂ ಕೂಡ ನಮ್ಮೊಂದಿಗೆ ಕೈ ಜೋಡಿಸಲು ಮತ್ತು ಬೆಂಬಲಿಸಲು “8088433026” ನಂಬರ್ಗೆ “NIRATHANKA” ಎಂದು ಸಂದೇಶವನ್ನು ಕಳುಹಿಸಿಕೊಡಬಹುದು.
|