ರಮೇಶ ಎಂ.ಎಚ್. MSW, PGDELT ಸಮಾಜಕಾರ್ಯ ಕ್ಷೇತ್ರದಲ್ಲಿ ಅಮೋಘ ಸಾಧನೆ ಮಾಡಿದ ಕಾರಣಕ್ಕಾಗಿ ರಾಷ್ಟ್ರಮಟ್ಟದ ಪ್ರಶಸ್ತಿ ಗಳಿಸಿದ, `ನಿರುತ ಪ್ರಕಾಶನ’ ಸಂಸ್ಥೆಯ ಮುಖ್ಯಸ್ಥರಾದ ಮತ್ತು ನನ್ನ ಆತ್ಮೀಯರಾದ ಮಾನ್ಯ ರಮೇಶ ಎಂ.ಎಚ್. ರವರು ರಾಜಕೀಯ ಕ್ಷೇತ್ರ ಪ್ರವೇಶಿಸುತ್ತಿರುವುದು ನನಗಂತೂ ಒಂದು ಸಂತಸದ ಸುದ್ದಿಯೆ. ಮಿತ್ರ ರಮೇಶರವರು ವಿದ್ಯಾವಂತ, ಸಮಾಜಕಾರ್ಯ ಸಾಹಿತ್ಯ ಪ್ರಕಾಶಕ, ಉತ್ತಮ ಸಂಘಟಕ, ಯೋಜನೆ ಮತ್ತು ಅನುಷ್ಠಾನ ನಿಪುಣ, ಕನ್ನಡ ಪ್ರೇಮಿ, ಶ್ರೇಷ್ಠ ಮಾತುಗಾರ, ವಿಕಾಶವಾದಿ ಹಾಗೂ ಸಹೃದಯಿ. ಇಂಥವರು ರಾಜಕೀಯಕ್ಕೆ ಬಂದರೆ ಸಮುದಾಯ, ಸಮಾಜಗಳು ನಿಶ್ಚಯವಾಗಿಯೂ ಅಭ್ಯುದಯದತ್ತ ಮುಖ ಮಾಡಬಹುದು. ಬೆಂಗಳೂರು ವಿಶ್ವವಿದ್ಯಾಲಯಕ್ಕೆ ಸೇರಿದ, ಅನುಪಮ ಕಾಲೇಜಿನ ಸಮಾಜಕಾರ್ಯ ವಿಭಾಗದಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದ ಶ್ರೀಯುತರು (2008), ಆನಂತರ ತಮ್ಮದೇ ಆದ `ನಿರಾತಂಕ’ ಎಂಬ ಸ್ವಯಂ ಸೇವಾ ಸಂಸ್ಥೆಯನ್ನು ಪ್ರಾರಂಭಿಸಿ, ಸಮಾಜಕಾರ್ಯದ ವಿವಿಧ ಆಯಾಮಗಳಲ್ಲಿ ಅವಿರತವಾಗಿ ಶ್ರಮಿಸುತ್ತಾ ಬರುತ್ತಿದ್ದಾರೆ. ಸಮಾಜದ ಆ ಭಾಗದ ವೃದ್ಧರ, ಆರೋಗ್ಯ, ಆಹಾರ ರಕ್ಷಣೆ, ವೃದ್ಧರ ಕಲ್ಯಾಣ ಮುಂತಾದ ಸದುದ್ದೇಶಗಳನ್ನಿಟ್ಟುಕೊಂಡು, 2007 ರಲ್ಲಿ ನಿರಾತಂಕ ಸಂಸ್ಥೆಯನ್ನು ಪ್ರಾರಂಭಿಸಿದರು. ಸಂಸ್ಥೆಯಿಂದ ಯುವಕರಿಗೆ ಶಿಕ್ಷಣ ಮತ್ತು ಕೌಶಲ್ಯಾಭಿವೃದ್ಧಿಗಳನ್ನು ಕೊಡಿಸುವುದರ ಜೊತೆಗೆ, ಅವರಿಗೆ ವಿವಿಧ ಸಂಘ ಸಂಸ್ಥೆಗಳಿಂದ ಕೆಲಸ ಸಿಗುವಂತೆ ನೋಡಿಕೊಂಡಿದ್ದಾರೆ. ಹಾಗೇನೆ ಕನ್ನಡ ಮತ್ತು ಆಂಗ್ಲ ದ್ವಿಭಾಷೆಗಳ, ``ಸಮಾಜಕಾರ್ಯದ ಹೆಜ್ಜೆಗಳು’’ ಪತ್ರಿಕೆಯನ್ನು ಪ್ರಾರಂಭದಲ್ಲಿ ಮಾಸಿಕವಾಗಿ ಹಾಗೂ ತದನಂತರದ ದಿನಗಳಲ್ಲಿ ತ್ರೈಮಾಸಿಕವಾಗಿ ನಿಯತಕಾಲಿಕವನ್ನು, ಇಸ್ವಿ 2010 ರಿಂದ, ತಮ್ಮ ಸಂಪಾದಕತ್ವದಲ್ಲಿ ಹೊರತಂದಿದ್ದಾರೆ. ಸದರಿ ಪತ್ರಿಕೆಯಲ್ಲಿ ಸಮಾಜಕಾರ್ಯ, ಮಾನವ ಸಂಪನ್ಮೂಲ ಮತ್ತು ಕೈಗಾರಿಕಾ ಸಂಬಂಧಗಳ ಕ್ಷೇತ್ರಗಳಿಗೆ ಸಂಬಂಧಿಸಿದಂತೆ, ಲೇಖನಗಳು, ಸಂದರ್ಶನಗಳು, ವ್ಯಕ್ತಿ ಚಿತ್ರಣಗಳು, ಸಾಧಕರ ಪರಿಚಯ, ಸಮಾಜಕಾರ್ಯ ವಿದ್ಯಾರ್ಥಿಗಳಿಗೆ ಜ್ಞಾನ, ಕೌಶಲ್ಯ ತರಬೇತಿ ಮತ್ತು ಉದ್ಯೋಗ ಮುಂತಾದ ವಿಷಯಗಳ ಬಗ್ಗೆ ಪುಷ್ಕಳ ಮಾಹಿತಿಯನ್ನು ಕೊಡುತ್ತಾ ಬಂದಿದ್ದಾರೆ. ನಿರುತ ಪ್ರಕಾಶನ ಸಂಸ್ಥೆಯನ್ನು, 2012 ರಲ್ಲಿ ಆರಂಭಿಸಿ, ಸಮಾಜಕಾರ್ಯ, ಸಮಾಜ ಕಲ್ಯಾಣ, ಮಾನವ ಸಂಪನ್ಮೂಲ, ಕೈಗಾರಿಕಾ ಸಂಬಂಧಗಳು, ಮನೋವಿಜ್ಞಾನ, ವಿಪತ್ತು ನಿರ್ವಹಣೆ, ಆರೋಗ್ಯ, ವ್ಯಕ್ತಿತ್ವ ವಿಕಸನ, ಭಾಷಣ ಕಲೆ ಮುಂತಾದ ವಿಷಯಗಳ ಮೇಲೆ, ಪ್ರೊ. ಶಂಕರ ಪಾಠಕ್, ಪ್ರೊ. ಎಚ್.ಎಂ. ಮರುಳಸಿದ್ಧಯ್ಯ, ಪ್ರೊ. ಟಿ.ಕೆ. ನಾಯರ್, ಡಾ. ವೆಂಕಟಪುಲ್ಲ, ಡಾ. ಸಿ.ಆರ್. ಗೋಪಾಲ್ ಮುಂತಾದ ಸಮಾಜಕಾರ್ಯ ಸಾಹಿತಿಗಳ 150ಕ್ಕೂ ಹೆಚ್ಚು ಪುಸ್ತಕಗಳನ್ನು ಪ್ರಕಟಿಸಿದ್ದಾರೆ. ಪ್ರಸ್ತುತ ಶ್ರೀಯುತರು ಎಂ&ಹೆಚ್ಆರ್ ಸೊಲ್ಯೂಷನ್ಸ್ ಪ್ರೈ.ಲಿ. ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಮಾನವ ಸಂಪನ್ಮೂಲ, ಕೈಗಾರಿಕಾ ಬಾಂಧವ್ಯ, ವೃತ್ತಿಯಲ್ಲಿ ಮಹಿಳೆಯರಿಗೆ ರಕ್ಷಣೆ ಮುಂತಾದ ವಿಷಯಗಳ ಮೇಲೆ ಅಲ್ಪಕಾಲಿಕ ತರಬೇತಿ ಶಿಬಿರಗಳನ್ನು ಆಯೋಜಿಸುತ್ತಿದ್ದಾರೆ. ಶುದ್ಧ ಕನ್ನಡ ಪ್ರೇಮಿಯಾಗಿರುವ ರಮೇಶರವರು, ಈಗ ಏಳು ವರ್ಷಗಳಿಂದ, ತಮ್ಮ ಮುಂದಾಳತ್ವದಲ್ಲಿ, ಇತರ ಸಂಘ ಸಂಸ್ಥೆಗಳು ಮತ್ತು ಕೈಗಾರಿಕೆಗಳ ಸಹಯೋಗದೊಂದಿಗೆ, ಕರ್ನಾಟಕದಲ್ಲಿ ರಾಜ್ಯಮಟ್ಟದ ಮಾನವ ಸಂಪನ್ಮೂಲ ವೃತ್ತಿನಿರತರ ಕನ್ನಡ ಸಮ್ಮೇಳನವನ್ನು ಆಯೋಜಿಸಿಕೊಂಡು ಬರುತ್ತಿದ್ದಾರೆ. ಶ್ರೀ ರಮೇಶರವರ ಅವಿಶ್ರಾಂತ, ಪ್ರಾಮಾಣಿಕ ಮತ್ತು ನಿರಂತರ ಸೇವೆಯನ್ನು ಅನುಲಕ್ಷಿಸಿ, ರಾಷ್ಟ್ರೀಯ ಸಮಾಜಕಾರ್ಯ ವೃತ್ತಿನಿರತರ ಸಂಸ್ಥೆಯು ಶ್ರೀಯುತರಿಗೆ, `ಯುವಸಾಧಕ ಪ್ರಶಸ್ತಿ-2019’ಯನ್ನಿತ್ತು ಗೌರವಿಸಿದೆ. ಹಾಗೇನೇ ಶ್ರೀಯುತರಿಗೆ ಪ್ರಮುಖವಾಗಿ ಬೆಂಗಳೂರು ಯುವ ಪ್ರಶಸ್ತಿ, ‘ಡಾ. ಮರ್ತುವ್ಕುಡಿ ಆರ್. ವೆಂಕಟಮ್ಮ ಅವರ ಸ್ಮಾರಕ ಪ್ರಶಸ್ತಿ’ ಹಾಗೂ 2014 ರಲ್ಲಿ ನಡೆದ ಬೆಂಗಳೂರು ಯುವ ಜನೋತ್ಸವದಲ್ಲಿ `ಬೆಂಗಳೂರು ಯುವ ಪ್ರಶಸ್ತಿ' ಮುಂತಾದ ಪ್ರಶಸ್ತಿ / ಬಹುಮಾನಗಳು ಸಂದಿವೆ. ಸಮಾಜಕಾರ್ಯ ಕ್ಷೇತ್ರದಲ್ಲಿ ಕೆಲಸ ಮಾಡುವ ಅನೇಕ ಸಂಘ ಸಂಸ್ಥೆಗಳು ಅವರನ್ನು ಸನ್ಮಾನಿಸಿವೆ. ಕನ್ನಡ ಸಾಹಿತ್ಯ ಪರಿಷತ್ತು, ಮಾನವ ಸಂಪನ್ಮೂಲ ರಾಷ್ಟ್ರೀಯ ಸಂಸ್ಥೆ, ಕರ್ನಾಟಕ ಸಮಾಜಕಾರ್ಯ ವೃತ್ತಿನಿರತರ ಸಂಘ, ಎನ್.ಎಚ್.ಆರ್.ಡಿ. ಬೆಂಗಳೂರು ಮುಂತಾದ ಸಂಸ್ಥೆಗಳ ಆಜೀವ ಸದಸ್ಯರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪ್ರಸ್ತುತ ಬೆಂಗಳೂರಿನ ಉಲ್ಲಾಳು-29 ವಾರ್ಡಿನಲ್ಲಿ ಬಿ.ಬಿ.ಎಂ.ಪಿ. ಸದಸ್ಯ ಸ್ಥಾನಕ್ಕೆ ಸ್ಪರ್ಧಿಸುತ್ತಿದ್ದಾರೆ. ಮಾನ್ಯ ರಮೇಶರವರು ಹದಿನೈದು ವರ್ಷಗಳಿಂದ ಸಾರ್ವಜನಿಕ ಜೀವನದಲ್ಲಿದ್ದರೂ, ಅವರ ವಿರುದ್ಧ ಯಾವ ಆಪಾದನೆಗಳೂ ಇಲ್ಲ. ಈ ಎಲ್ಲದರ ಹಿನ್ನೆಲೆಯಲ್ಲಿ, ಶ್ರೀ ರಮೇಶರವರಿಗಿಂತ ಉತ್ತಮ ಅಭ್ಯರ್ಥಿ ನಮ್ಮಲ್ಲಿದ್ದಾರೆಯೇ? ಅವರನ್ನು ಚುನಾವಣೆಯಲ್ಲಿ ಗೆಲ್ಲಿಸಿದರೆ ನಮ್ಮ ಭಾಗದ ಜನತೆ ನಿಶ್ಚಯವಾಗಿಯೂ ಅಭ್ಯುದಯವನ್ನು ಕಾಣುತ್ತಾರೆ, ಅಲ್ಲವೆ?
0 Comments
Leave a Reply. |
Categories
All
RAMESHA NIRATANKA ಉಲ್ಲಾಳು ವಾರ್ಡಿನ ಸಮಸ್ತ ನಾಗರೀಕರನ್ನು ಒಂದೇ ವೇದಿಕೆಯಡಿಯಲ್ಲಿ ತರಲು ಪ್ರಯತ್ನಿಸಲಾಗುತ್ತಿದೆ. ಈಗಾಗಲೇ ಸಮಾಜದ ವಿವಿಧ ಕ್ಷೇತ್ರದ 50,000 ಕ್ಕೂ ಹೆಚ್ಚು ಸದಸ್ಯರು ನಿರಾತಂಕ ಸ್ವಯಂ ಸೇವಾ ಸಂಸ್ಥೆಯೊಂದಿಗೆ ಒಡನಾಟದಲ್ಲಿದ್ದಾರೆ. ಹಲವಾರು ಸಮಾಜ ಸೇವಾ ಕಾರ್ಯಗಳಲ್ಲಿ ನಿರಾತಂಕ ಸಂಸ್ಥೆಗೆ ಬೆಂಬಲವನ್ನು ನೀಡುತ್ತಿದ್ದಾರೆ. ತಾವೂ ಕೂಡ ನಮ್ಮೊಂದಿಗೆ ಕೈ ಜೋಡಿಸಲು ಮತ್ತು ಬೆಂಬಲಿಸಲು “8088433026” ನಂಬರ್ಗೆ “NIRATHANKA” ಎಂದು ಸಂದೇಶವನ್ನು ಕಳುಹಿಸಿಕೊಡಬಹುದು.
|